ಹಾಯ್ , ಮೀನಹೆಜ್ಜೆ ಅಂತ ನನ್ನ ನಡೆಯನ್ನು ನಾನೇ ಕರೆದುಕೊಂಡು ನಿಮ್ಮೆದುರು ಇದುವರೆಗೆ ಕಾಣದ ಈ ಹೆಜ್ಜೆಗಳನ್ನು ಇಡಲು ಹೊರಟಿರುವ , ಕಣಾದರಾಘವ ಅಂತ ನನ್ನ ಹೆಸರು . ವೃತ್ತಿಯಲ್ಲಿ ನಾನು ಆಯುರ್ವೇದ ವೈದ್ಯ. ಬರೆಯುವುದು ತೀರದ ಹವ್ಯಾಸ ಮತ್ತು ತೀರವೊಂದಕ್ಕಾಗಿ ನನಗೆ ನಾನೇ ಕಂಡುಕೊಂಡ ಮೀನಹೆಜ್ಜೆ.
ಕಥೆ, ಕವಿತೆ ಮತ್ತು ನಾಟಕಗಳನ್ನು ಬರೆಯುತ್ತ , ಹಾಗೆ ಬರೆದ ಪ್ರತಿಗಳನ್ನು ಕಪಾಟಿನಲ್ಲಿ ಪೇರಿಸುತ್ತ , ಸಾಹಿತ್ಯಾಸಕ್ತರು ಮನೆಗೆ ಬಂದಾಗ ಮಾತ್ರ ಅವುಗಳಿಗೊಮ್ಮೊಮ್ಮೆ ಮುಕ್ತಿ ಕೊಡುತ್ತ , ಪುಕ್ಕಟೆ ಶಭಾಶ್ಗಿರಿಯ ಭಾರವನ್ನು ಹೆಗಲ ಮೇಲೆ ಹೊತ್ತು ಬೀಗುತ್ತ, ತೀರ ಸೋಮಾರಿಯಾಗಿ ನಾನಾಯಿತು, ನನ್ನ ಕ್ಲಿನಿಕ್ಕಾಯಿತು ಎಂಬಂತಿದ್ದ ನನ್ನ ೧೯೪೭ ರ ಮನಸ್ಸನ್ನು ಬದಲಾಯಿಸಿದ್ದು ಬ್ಲಾಗ್ ಲೋಕ. ಗೆಳಯ ಶ್ರೀನಿಧಿ ಮುಂಚೆಯಿಂದಲೂ ಕರೆಯುತ್ತಿದ್ದ,, ಬಾರಯ್ಯ, ಬರಿ, ....ಬಂದಿದ್ದೇನಯ್ಯ..
ಉಮರ್ ಖಯ್ಯಾಮನ ರುಬಾಯತ್ತುಗಳಿಂದ , ತೀವ್ರ ಪ್ರೇರಿತನಾಗಿ ರುಬಾಯತ್ತುಗಳ ರಚನೆಯಲ್ಲಿ ತೊಡಗಿದ್ದೇನೆ, ನಿಮಗಾಗಿ.....
ರುಬಾಯತ್ತುಗಳು
(೧)
ಒಂದು ದಿನ ಬಾಲ್ಯದಲಿ ವಿಜ್ಞಾನಮನೆ ಹೊಕ್ಕು
ಏನಿದರ ಮರ್ಮವದು ಅರಿಯಬಯಸಿ.
ಗೋಡೆ ಸಾಲುಗಳಲ್ಲಿ ದೇವದೇವರ ಚಿತ್ರ
ಕಂಡು ನಾ ಹಾರಿದ್ದೆ ಹೆಂಡದಂಗಡಿ ಕಡೆಗೆ.
ಪ್ರತಿಕ್ರಿಯಿಸಿ, ನಿರೀಕ್ಷಿಸಿ... ನಿಮ್ಮವ,
ಕಣಾದ..
ಜಸ್ಟ್ ಬ್ಯಾಂಗ್ಲೂರ್
2 months ago
This comment has been removed by the author.
ReplyDeletekannige kanuvantada kanaada santosha praramba nidanavaadaru pragati bega aagali..
ReplyDeletenirantaravaagi bari..
ninna shakti namage gottu .....
baryale dostaaaaaaaa.......
ohh ... banri sara blog lokakka .... suswagata ..
ReplyDeleteವೆಲ್ಕಮ್ಮೂ!
ReplyDeletedhanyavaadasahasraani bhaavathaam swaagatam prati.
ReplyDeleteA thing of beauty is joy forever... go ahead..
ReplyDelete